ದೊಡ್ಡೋರೆಲ್ಲಾ ಅದೇ ರೀತಿ

“ಮರಗಳೆಲ್ಲಾ ಯಾಕೆ ಅಷ್ಟೊಂದ್
ದೊಡ್ಡಕ್ ಇರ್‍ತಾವೆ?”
“ಒಳ್ಳೇವ್ರೆಲ್ಲಾ ಹಾಗೇ ಮರಿ,
ಎತ್ತರ ಇರ್‍ತಾರೆ.”

“ಒಳ್ಳೇವ್ರಾದ್ರೆ ಯಾಕೆ ಮತ್ತೆ
ಮಾತೇ ಆಡೊಲ್ಲ?”
“ಮಾತಾಡಿದ್ರೆ ಬಂತೇ ಚಿನ್ನ
ನಡತೆಗೆ ತಪ್ಪಲ್ಲ.”

“ಎಲೇನ್ ಕಿತ್ರೂ, ಹೂವನ್ ಕಿತ್ರೂ
ಯಾಕೆ ಬೈಯಲ್ಲ?
ಕೊಡೋಕೇಂತ್ಲೆ ಹೂಬಿಡೋರು
ಎಂದೂ ಅನ್ನಲ್ಲ.”

“ಇರೋವಾಗ ಕಾಯಿ ಹಣ್ಣು
ನೆರಳೂ ಕೊಡ್ತಾವೆ,
ಉರುಳಿದ ಮೇಲೂ ಕಿಟಕಿ ಬಾಗಿಲು
ಮೇಜು ಆಗ್ತಾವೆ”

“ದೊಡ್ಡೋರೆಲ್ಲ ಅದೇ ರೀತಿ
ನೋವನ್ ತಾಳ್ತಾರೆ,
ಸುಖವಾಗಿರ್‍ಲಿ ಜನರು ಅಂತ
ಜೀವ ಕೊಡ್ತಾರೆ.”
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಈ ಶಿಕ್ಷೆ ಯಾರಿಗೆಂದು?
Next post ಇದು ಮೊದಲು

ಸಣ್ಣ ಕತೆ

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

cheap jordans|wholesale air max|wholesale jordans|wholesale jewelry|wholesale jerseys